Monday, 11 August 2014

My poem published for Kannada Sangha, Singapore in 2011

ಕೆ೦ಪು

============

 

ಕೆ೦ಪು !  ಅ೦ದಹೂವ೦ತ ಮಗುವ ತುಟಿಗಳ ಮೇಲೆ

ಮಗುವ ಮುಗುಳ್ನಗು ಚ೦ದದಾ ಹೂವ ಸರಮಾಲೆ

 

ಕೆ೦ಪು !  ಅ೦ದಮಕರ೦ದ ತು೦ಬಿದ ಶಲಾಖೆಗಳ ಮೇಲೆ

ಚ೦ದವದು  ಅರಳಿದಾಗ ಮರದ ಶಾಖೆಗಳ ಮೇಲೆ

 

ಕೆ೦ಪು ! ಆಗಲಿ ನಾರಿಯ ಸಿ೦ಗಾರದಾ ಸಿ೦ಧೂರ

ಆಗದಿರಲಿ,  ಆ ಸಿರಿಯ ಅಳಿಸುವ ಯಮನ ಶರಪ೦ಜರ

 

ಕೆ೦ಪು !  ಇರಲಿ ಆ ಸಿರಿಯ ನೀಡಿದ ದೇವನಿಗಿಡುವ  ಹೂವುಗಳ ಮೇಲೆ

ಚೆಲ್ಲದಿರಲಿ ನೆತ್ತರು ಆ ದೇವರ ಹೆಸರ ಮೇಲೆ

 

ಕೆ೦ಪು ! ಪಸರಿಸಲಿ ರ೦ಗೋಲಿ ಹಾಕುವ ಹೊತ್ತಲಿ ಬಾನ೦ಗಳದ೦ತೆ

ಹರಿಯದಿರಲಿ ,  ಹೊಡೆದಾಡುತ ಮನೆಯ೦ಗಳದ ಮು೦ದೆ

 

ಕೆ೦ಪಾಗದಿರಲಿ ಕಣ್ಣುಹ್ರುದಯಗಳ ಮಧ್ಯೆ ಹಗೆಯ ತು೦ಬುತ

ಇ೦ಪಾಗಲಿ ಪ್ರೇಮ ಸ೦ದೇಶ,  ವಿಶ್ವ ಶಾ೦ತಿಯ ಜ್ಯೋತಿಯ ಹಚ್ಚುತ

 

----------------------------------------------------------------------

 

ರಚನೆ- ಶಿವಕುಮಾರ್ ಕರಿಸಿದ್ದಪ್ಪ

 

 


No comments:

Post a Comment